ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ರಾಷ್ಟ್ರೀಯ ಹೆದ್ದಾರಿ ೨೧೨ ಅಗಲೀಕರಣ ಕಾಮಗಾರಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಜೂ. ೨೩ ಮತ್ತು ೨೪ ರಂದು ನಗರದಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಟಿ. ನರಸೀಪುರದ ಬಳಿಯಿರುವ ಮೂಲ ಸ್ಥಾವರದ ಹತ್ತಿರವಿರುವ ಏರು ಕೊಳವೆ ಮಾರ್ಗವನ್ನು ೩೫೦ ಮೀಟರ್ನಷ್ಟು ಸ್ಥಳಾಂತರಿಸಿ ಅಳವಡಿಸುವ ಕಾಮಗಾರಿಗೆ ಈಗಾಗಲೇ ಕೊಳವೆಗಳನ್ನು ಅಳವಡಿಸುವ ಕಾಮಗಾರಿ ನಡೆಯುತ್ತಿದ್ದು, ೨ ದಿನಗಳು ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು...
|
ಜಿಲ್ಲಾಧಿಕಾರಿಗಳ ವರ್ಗಾವಣೆ ಪ್ರಹಸನದಿಂದ ಜಿಲ್ಲಾಡಳಿತ ಕಳೆದ ಹತ್ತಾರು ದಿನಗಳಿಂದ ಸ್ಥಗಿತಗೊಂಡಿದ್ದು, ಇದರ ದುಷ್ಪರಿಣಾಮವಾಗಿ ಜಿಲ್ಲಾದ್ಯಂತ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹಿನ್ನೆಡೆ ಉಂಟಾಗಿದೆ.ಈ ಬಗ್ಗೆ ಜನಪ್ರತಿನಿಧಿಗಳಾಗಲಿ, ಉಸ್ತುವಾರಿ ಸಚಿವರಾಗಲಿ ಕಿಂಚಿತ್ತೂ ಗಮನಹರಿಸದೇ ಇರುವುದು ವಿಪರ್ಯಾಸ. ಒಬ್ಬ ಅಧಿಕಾರಿ ವರ್ಗಾವಣೆ ಸಂಗತಿ ಅಭಿವೃದ್ಧಿಗೆ ಹಿನ್ನೆಡೆ ಉಂಟು ಮಾಡಿದ್ರೇ ಹೇಗೆ ಎಂಬುದು ಸಾರ್ವಜನಿಕರ ಪ್ರಶ್ನೆ.ದುಷ್ಪರಿಣಾಮ: ಜಿಲ್ಲೆಯ ಎಲ್ಲಾ ಇಲಾಖೆಗಳ ಕೆಲಸ, ಕಾರ್ಯಗಳು ಜಿಲ್ಲಾಧಿಕಾರಿಗಳ...
|
* ಉ.ಕ.ಜಿಲ್ಲಾ ಪಂಚಾಯತ್ ೨೦೧೨-೧೩ನೇ ಆಯವ್ಯಯ ಮಂಡನೆ; ೫೯೯.೩೬ ಕೋ. ರು ಅನುದಾನ*ಅತೀವೃಷ್ಟಿ, ಪ್ರವಾಹ ಪರಿಸ್ಥಿತಿ ಎದುರಿಸಲು ಸಿದ್ದರಾಗಿ ಉ.ಕ.ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅಧಿಕಾರಿಗಳಿಗೆ ಕರೆಕಾರವಾರ: ರಾಜ್ಯ ಅರಣ್ಯ ಸೇವೆಗೆ ಸೇರಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ ವೃಂದಕ್ಕೆ ಸ್ಥಾನಪನ್ನ ಭಡ್ತಿ ನೀಡಿ ತಕ್ಷಣ ಜಾರಿಗೆ ಬರುವಂತೆ ರಾಜ್ಯ ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಎಸ್. ಬಾಲಕೃಷ್ಣಯ್ಯ ಸೋಮವಾರ ಆದೇಶ ಹೊರಡ...
|
ಕಾಮನ್ವೆಲ್ತ್ ಕ್ರೀಡಾಕೂಟದ ಸಂಘಟನಾ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಸುರೇಶ್ ಕಲ್ಮಾಡಿ ನೇಮಕಕ್ಕೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೇ ಕಾರಣ ಎಂಬ ಬಿಜೆಪಿ ಆರೋಪದಿಂದ ಲೋಕಸಭೆಯಲ್ಲಿ ಕೋಲಾಹಲದ ವಾತಾವರಣ ಉಂಟಾಯಿತು. ಅಲ್ಲದೆ, ಕ್ರೀಡಾ ಸಚಿವ ಅಜಯ್ ಮಕೇನ್ ಹಾಗೂ ಜಾರ್ಖಂಡ್ ಮಾಜಿ ಸಿಎಂ, ಸಂಸದ ಮಧು ಕೋಡಾ ಬಗ್ಗೆ ಆಕ್ಷೇಪಾರ್ಹ ಹೇಳಿಕೆಯನ್ನು ಬಿಜೆಪಿ ನಾಯಕ ಯಶವಂತ್ ಸಿನ್ಹ ನೀಡಿದ ಸಂದರ್ಭದಲ್ಲಿ ಲೋಕಸಭೆಯಲ್ಲಿ ಗದ್ದಲ ಉಂಟಾಯಿತು. ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಚರ್ಚೆ ಅಪೂರ್ಣವಾಗಿದ್ದು,...
|
ಕಿತ್ತೂರು: ಪಿರಿಯಾಪಟ್ಟಣ ತಾಲೂಕಿನ ಕಿತ್ತೂರು ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ಮೂರು ದಿವಸಗಳಿಂದ ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗದೆ ಸಾರ್ವಜನಿಕರು ಮತ್ತು ಉದ್ಯಮಿಗಳಿಗೆ ತೀವ್ರ ತೊಂದರೆ ಉಂಟಾಗಿದೆ.ಈ ಗ್ರಾಮ ಕ್ಷೇತ್ರದ ಶಾಸಕ ಕೆ. ವೆಂಕಟೇಶ್ ಮತ್ತು ಜಿ.ಪಂ. ವಿರೋಧ ಪಕ್ಷದ ನಾಯಕಿ ಮಂಜುಳರಾಜ್ ಅವರ ಗ್ರಾಮವಾಗಿದ್ದು, ಇಲ್ಲಿಯೇ ಈ ರೀತಿ ವಿದ್ಯುತ್ ಸಮಸ್ಯೆ ಉಂಟಾಗಿರುವುದು ಇವರ ಆಕ್ರೋಶಕ್ಕೆ ಕಾರಣವಾಗಿದೆ.ಈ ಭಾಗದಲ್ಲಿ ರೈಸ್ಮಿಲ್, ಸಾಮಿಲ್, ಜೆರಾಕ್ಸ್ ಅಂಗಡಿ ಸೇರಿದಂತೆ ಇನ್ನಿತರ...
|
ರಾಜ್ಯ ಸರ್ಕಾರ ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ (ಹುಡಾ) ಸದಸ್ಯರನ್ನಾಗಿ ಐವರು ಬಿಜೆಪಿ ಮುಖಂಡರನ್ನು ನೇಮಕ ಮಾಡಿದೆ. ಈ ಬಗ್ಗೆ ಕೆಲವರಿಗೆ ಸಮಾಧಾನವಾದರೆ ಇನ್ನು ಹಲವರಿಗೆ ಅಸಮಾಧಾನ ಉಂಟಾಗಿದೆ.ರಾಜ್ಯ ಬಿಜೆಪಿ ಸರ್ಕಾರದ ಅವಧಿ ಹೆಚ್ಚು ಕಡಿಮೆ ಇನ್ನೊಂದು ವರ್ಷವಿದೆ. ಚುನಾವಣೆ ಪ್ರಕ್ರಿಯೆ ಸಾಮಾನ್ಯವಾಗಿ ೬ ತಿಂಗಳ ಮುಂಚಿತವಾಗಿಯೇ ಆರಂಭವಾಗುತ್ತದೆ. ಚುನಾವಣೆ ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆ ಸದಸ್ಯತ್ವ ಮಾಯ.ಹೀಗೆ ಅಲ್ಪ ಅವಧಿಗೆ ಸದಸ್ಯರನ್ನಾಗಿ ನೇಮಕ ಮಾಡದಿದ್ದರೂ ಆಗುತ್ತಿತ್ತು ಎಂಬ ಅಸಮಾಧಾನ...
|
ಅರಸೀಕೆರೆ: ಜಾವಗಲ್ ಹೋಬಳಿ ಬಂದೂರು ಉಂಡಿಗನಾಳು ನಡುವೆ ವ್ಯಕ್ತಿಯೊಬ್ಬ ಟ್ರ್ಯಾಕ್ಟರ್ನಿಂದ ಬಿದ್ದು ಮೃತಪಟ್ಟಿರುವ ಘಟನೆ ಸೋಮವಾರ ರಾತ್ರಿ ಸಂಭವಿಸಿದೆ. ಚಿಕ್ಕಯ್ಯ ಎಂಬವರ ಮಗ ನಿರ್ವಾಣಿ (೩೦) ಮೃತಪಟ್ಟ ದುರ್ದೈವಿ. ಉಂಡಿಗನಾಳಿನಿಂದ ಜಾವಗಲ್ಗೆ ಹೋಗುತ್ತಿದ್ದ ಸಂದರ್ಭದಲ್ಲಿ ಆಯ ತಪ್ಪಿ ಬಿದ್ದು, ಮೃತಪಟ್ಟಿದ್ದಾನೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ....
|
ದೀಪಾವಳಿ ಸಂದರ್ಭದಲ್ಲಿ ಭಾರತಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಜುಗರ ಉಂಟಾಗುವ ಸ್ಥಿತಿ ಉಂಟಾಗಿದೆ. ಅಮೆರಿಕ, ಬ್ರಿಟನ್, ನ್ಯೂಜಿಲೆಂಡ್, ಕೆನಡಾ ಮತ್ತು ಆಸ್ಟ್ರೇಲಿಯಾ ಭಾರತದ ಪ್ರವಾಸದ ವೇಳೆ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ತಮ್ಮ ಪ್ರಜೆಗಳಿಗೆ ಸೂಚಿಸಿರುವುದೇ ಇದಕ್ಕೆ ಕಾರಣ. ಹಿಂದಿನ ವರ್ಷಗಳಲ್ಲಿ ದೀಪಾವಳಿ ಸಂದರ್ಭ ದೆಹಲಿ ಮತ್ತಿತರ ಕಡೆ ಸೊಫೀಟ ನಡೆದಿತ್ತು. ಈ ಹಿನ್ನೆಲೆಯಲ್ಲಿ ಈ ರಾಷ್ಟ್ರಗಳು ಎಚ್ಚರಿಕೆಯ ಸಂದೇಶ ಪ್ರಕಟಿಸಿವೆ.ಕಾಮನ್ವೆಲ್ತ್ ರಾಷ್ಟ್ರ ಸರ್ಕಾರಗಳ ಮುಖ್ಯಸ್ಥರ ಸಮಾವೇಶದಲ್ಲಿ...
|
ಪ್ರಸ್ತಾವಿತ ಲೋಕಪಾಲದಲ್ಲಿ ಪ್ರಧಾನಿ ಹುದ್ದೆಯನ್ನು ಸೇರಿಸಬೇಕೇ ಬೇಡವೇ ಎಂಬ ಬಗ್ಗೆ ಈಗ ಸಂಸದೀಯ ಸಮಿತಿಯಲ್ಲೇ ಭಿನ್ನಮತ ಉಂಟಾಗಿದೆ. ಸಮಿತಿಯಲ್ಲಿ ಪಕ್ಷಾಧಾರಿತ ನಿಲುವುಗಳು ಹೆಚ್ಚಾಗಿ ಕೇಳಿಬಂದಿರುವುದರಿಂದ ಈ ಬೆಳವಣಿಗೆ ಉಂಟಾಗಿದೆ. ಲಾಲು ಯಾದವ್, ರಾಮ್ವಿಲಾಸ್ ಪಾಸ್ವಾನ್ ಪ್ರಧಾನಿ ಹುದ್ದೆಯನ್ನು 'ಲೋಕ' ವ್ಯಾಪ್ತಿಗೆ ತರುವುದಕ್ಕೆ ವಿರೋಧ ವ್ಯಕ್ತಪಡಿಸಿದರು. ಬಿಜೆಪಿ ಮತ್ತಿತರ ಪಕ್ಷಗಳು ಕೆಲವೊಂದು ನಿಯಮಗಳೊಂದಿಗೆ ಹುದ್ದೆಯನ್ನು ಲೋಕಪಾಲಕ್ಕೆ ತರಬೇಕೆಂದು ಪ್ರತಿಪಾದಿಸಿತು....
|
ನವದೆಹಲಿ, ಮಾ.22 : "ರಾಜ್ಯದಲ್ಲಿ ಚುನಾವಣೆ ಘೋಷಣೆ ಆಗಿರುವುದರಿಂದ ಯಾವುದೇ ಭಿನ್ನಮತ ಉಂಟಾಗದಂತೆ ಎಲ್ಲಾ ನಾಯಕರನ್ನು ಒಗ್ಗೂಡಿಸಿಕೊಂಡು ಚುನಾವಣೆ ಎದುರಿಸಿ" ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ರಾಜ್ಯ ಕಾಂಗ್ರೆಸ್ ನಾಯಕರಿಗೆ ಸಲಹೆ ನೀಡಿದ್ದಾರೆ.ನವದೆಹಲಿಯಲ್ಲಿ ಗುರುವಾರ ರಾಹುಲ್ ಗಾಂಧಿ ಅವರೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮತ್ತು ವಿಪಕ್ಷ ನಾಯಕ ಸಿದ್ಧರಾಮಯ್ಯ ಸಭೆ ನಡೆಸಿದರು. ಸಭೆಯಲ್ಲಿ ಚುನಾವಣೆ ಘೋಷಣೆ ಆಗಿರುವುದರಿಂದ ಪಕ್ಷದಲ್ಲಿ ಯಾವುದೇ ಭಿನ್ನಮತ ಉಂಟಾಗಬಾರದು...
|