ಭೂಸ್ವಾಧೀನಕ್ಕಾಗಿ ರೈತರು ಮತ್ತು ಪೊಲೀಸರ ಮಧ್ಯೆ ನಡೆದ ಸಂಘರ್ಷದಲ್ಲಿ ಪೊಲೀಸರು ಕೆಲ ಮಹಿಳೆಯರ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಆರೋಪವನ್ನು ತಳ್ಳಿಹಾಕಿದ ಸರಕಾರ, ಯಾವುದೇ ಅತ್ಯಾಚಾರ ಪ್ರಕರಣಗಳು ದಾಖಲಾಗಿಲ್ಲವೆಂದು ಸ್ಪಷ್ಟನೆ ನೀಡಿದೆ. ಉತ್ತರಪ್ರದೇಶದ ಗ್ರೇಟರ್ ನೋಯ್ಡಾ ಜಿಲ್ಲೆಗಳಲ್ಲಿ ನಡೆದ ರೈತರ ಮತ್ತು ಪೊಲೀಸರ ಘರ್ಷಣೆಯಲ್ಲಿ ಅತ್ಯಾಚಾರ ಪ್ರಕರಣಗಳು ನಡೆದ ಬಗ್ಗೆ ಖಚಿತವಾಗಿಲ್ಲ ಎಂದು ಕೇಂದ್ರ ಸರಕಾರ ರಾಜ್ಯಸಭೆಗೆ ಮಾಹಿತಿ ನೀಡಿದೆ....
|
ಹರಿಪ್ರಿಯಾ ಅವರಿಗೆ ಶನಿವಾರ (ಅ.28) ಬರ್ತ್ಡೇ ಸಂಭ್ರಮ. ಈಕೆ ಹುಟ್ಟಿದ್ದು ಬೆಂಗಳೂರಿನಿಂದ ಸರಿಸುಮಾರು 56 ಕಿ.ಮೀ ದೂರದಲ್ಲಿರುವ ಚಿಕ್ಕಬಳ್ಳಾಪುರದಲ್ಲಿ. ಹರಿಪ್ರಿಯಾ ಮೂಲ ಹೆಸರು ಶ್ರುತಿ. ಇಂದು ಆಕೆ ತಮ್ಮ 26ನೇ ಹುಟ್ಟುಹಬ್ಬವನ್ನು ತಮ್ಮ ಫ್ರೆಂಡ್ಸ್ ಹಾಗೂ ಕುಟುಂಬವರ್ಗದವರೊಂದಿಗೆ ಆಚರಿಸಿಕೊಳ್ಳಲಿದ್ದಾರೆ.ಹುಟ್ಟುಹಬ್ಬಕ್ಕೂ ಒಂದು ದಿನ ಮುನ್ನ ಹೊಸ ಚಿತ್ರಕ್ಕೆ ಸಹಿ ಹಾಕಿದ್ದಾರೆ ಹರಿಪ್ರಿಯಾ. ಚಿತ್ರದ ಹೆಸರು 'ಕಿಲಾಡಿ ಕಿಟ್ಟಿ'. ನಾಯಕ ನಟ ಶ್ರೀನಗರ ಕಿಟ್ಟಿ. ಈಕೆ ಅಭಿನಯದ ತೆಲುಗು ಚಿತ್ರ 'ಪಿಲ್ಲ...
|
13: ಪೂಂಜಾಲಕಟ್ಟೆ ಕಾಲೇಜಿನ ವಿದ್ಯಾರ್ಥಿನಿ ಗೇರುಕಟ್ಟೆ ನಿವಾಸಿ ಪ್ರಜ್ಞಾಲತಾ ಆತ್ಮಹತ್ಯೆ ಪ್ರಕರಣಕ್ಕೆ ಪೊಲೀಸರು ಮುಕ್ತಾಯ ಹಾಡಿದ್ದಾರೆ. ಪ್ರಜ್ಞಾಳ ತಾಯಿ ಆರೋಪ ಮಾಡಿದಂತೆ ಬಜರಂಗದಳ, ಎಬಿವಿಪಿ ಕಾರ್ಯಕರ್ತ ಪುನೀತ್ ವಿರುದ್ಧ ಬೆಳ್ತಂಗಡಿ ಠಾಣಾ ಪೊಲೀಸರು ಕೊಲೆ ಪ್ರಕರಣ ಖಲಿಸಿಕೊಂಡಿದ್ದಾರೆ. ಇದರೊಂದಿಗೆ ಪ್ರಜ್ಞಾಳ ಗೆಳತಿಯರು, ಕುಟುಂಬ ನ್ಯಾಯ ಸಿಕ್ಕ ತೃಪ್ತಿಯಲ್ಲಿದ್ದಾರೆ.ಜು 11ರಂದು ಪ್ರಜ್ಞಾಳ ತಾಯಿ ಗೀತಾ ನೀಡಿದ ದೂರಿನಿಂದ ಮುಚ್ಚಿ ಹೋಗುವ ಹಂತದಲ್ಲಿದ್ದ ವಿದ್ಯಾರ್ಥಿನಿ ಪ್ರಜ್ಞಾಲತಾ ಆತ್ಮಹತ್ಯೆ...
|
ಈಗಾಗಲೆ ಕನ್ನಡದಲ್ಲಿ ಹಲವಾರು 'ಕಿಲಾಡಿ' ಚಿತ್ರಗಳು ತೆರೆಕಂಡಿವೆ. ಉದಾಹರಣೆಗೆ ಹೇಳುವುದಾದರೆ, ಕಿಲಾಡಿ ಕಿಟ್ಟು, ಕಿಲಾಡಿ ಪುಟ್ಟು, ಕಿಲಾಡಿ ಜೋಡಿ, ಕಿಲಾಡಿ ಅಳಿಯ, ಕಿಲಾಡಿಗಳು ಇತ್ಯಾದಿ ಇತ್ಯಾದಿ. ಈಗ ಇದೇ ಸಾಲಿಗೆ ಮತ್ತೊಂದು ಕಿಲಾಡಿ ಚಿತ್ರ ಸೇರ್ಪಡೆಯಾಗುತ್ತಿದೆ. ಚಿತ್ರದ ಹೆಸರು 'ಕಿಲಾಡಿ ಕಿಟ್ಟಿ'.ಈ ಚಿತ್ರದ ನಾಯಕ ನಟ ಶ್ರೀನಗರ ಕಿಟ್ಟಿ. ಇದು ತೆಲುಗಿನ ಯಶಸ್ವಿ ಚಿತ್ರ 'ಬ್ಲೇಡ್ ಬಾಬ್ಜಿ' ರೀಮೇಕ್. ಮೂಲ ಚಿತ್ರದಲ್ಲಿ ಅಲ್ಲರಿ ನರೇಶ್ ಅಭಿನಯಿಸಿದ್ದರು. 'ಕಿಲಾಡಿ ಕಿಟ್ಟಿ' ಚಿತ್ರಕ್ಕೆ ಇಬ್ಬರು...
|
ಗಣಿಗಾರಿಕೆ ವ್ಯವಹಾರದಲ್ಲಿ ತೊಡಗಿಕೊಂಡು ಆರ್ಥಿಕ ನಷ್ಟಕ್ಕೊಳಗಾಗಿ ಸಾಲಗಾರರಿಂದ ತೀವ್ರ ಕಿರುಕುಳಕ್ಕೆ ಒಳಗಾಗಿದ್ದ ಸ್ಟೀಲ್ ಫ್ಯಾಕ್ಟರಿ ವ್ಯವಸ್ಥಾಪಕ ಕುಟುಂಬ ಸಮೇತ ಜಿಲ್ಲಾ ಪೊಲೀಸ್ ವರಿಷ್ಠರಲ್ಲಿ ರಕ್ಷಣೆ ಮತ್ತು ಭದ್ರತೆ ಕೋರಿ ಶುಕ್ರವಾರ ಶರಣಾಗಿದ್ದಾನೆ.ಹಗರಿ ಸಮೀಪದಲ್ಲಿ ಇರುವ ಜಾನಕಿ ಸ್ಟೀಲ್ಸ್ ಕೈಗಾರಿಕೆಯಲ್ಲಿ ವ್ಯವಸ್ಥಾಪಕನಾಗಿ ಕೆಲಸ ಮಾಡುತ್ತಿರುವ ಭರತ್ಕುಮಾರ್ ಮತ್ತು ಆತನ ಪತ್ನಿ ಹಾಗೂ ಪುತ್ರರು ಶುಕ್ರವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಆಗಮಿಸಿ ಪೊಲೀಸ್ ವರಿಷ್ಠಾಧಿಕಾರಿ...
|
ಭೂಮಾಪನಕ್ಕಾಗಿ (ಸರ್ವೆ) ರಿಯಲ್ ಎಸ್ಟೇಟ್ ವ್ಯಾಪಾರಿಯೊಬ್ಬರಿಂದ ರು.೫೦ ಸಾವಿರ ಮುಂಗಡವಾಗಿ ಲಂಚ ಸ್ವೀಕರಿಸಿದ ಆರೋಪದ ಮೇಲೆ ಲೋಕಾಯುಕ್ತ ಪೊಲೀಸರು ಕೋಲಾರದ ಭೂಮಾಪನ (ಸರ್ವೆ) ಇಲಾಖೆ ಸಹಾಯಕ ನಿರ್ದೇಶಕ (ಎಡಿ) ಎನ್.ಜೆ.ಪ್ರಸಾದ್ ಎಂಬುವರನ್ನು ಬಂಧಿಸಿದ್ದಾರೆ.ಬೆಂಗಳೂರಿನ ನಿವಾಸಿ ಹಾಗೂ ರಿಯಲ್ ಎಸ್ಟೇಟ್ ವ್ಯಾಪಾರಿಯಾದ ಸುನೀಲ್ ಕುಮಾರ್ ಎಂಬವರು ಕೋಲಾರ ತಾಲೂಕಿನ ನರಸಾಪುರದ ಬಳಿ ೧೦ ಎಕರೆ ಜಮೀನು ಖರೀದಿಸಿದ್ದು, ಇದರ ಸರ್ವೆ ಕಾರ್ಯಕ್ಕಾಗಿ ಕೋಲಾರದ ಭೂಮಾಪನ (ಸರ್ವೆ) ಇಲಾಖೆಗೆ ಅರ್ಜಿ ಸಲ್ಲ...
|
ಪಾಲಿಕೆ ಸದಸ್ಯ ಕಟ್ಟಾ ಜಗದೀಶ್ ಮತ್ತಿತರರ ವಿರುದ್ಧದ ಭೂಹಗರಣ ಆರೋಪಕ್ಕೆ ಸಂಬಂಧಿಸಿದ ತಡೆಯಾಜ್ಞೆ ತೆರವುಗೊಂಡ ಹಿನ್ನೆಲೆಯಲ್ಲಿ ಲೋಕಾಯುಕ್ತ ವಿಶೇಷ ನ್ಯಾಯಾಲಯ ವಿಚಾರಣೆ ಕೈಗೆತ್ತಿಕೊಂಡಿದೆ.ಮಂಗಳವಾರ ನ್ಯಾಯಾಲಯಕ್ಕೆ ಹಾಜರಾದ ಕಟ್ಟಾ ಜಗದೀಶ್ ಹಾಗೂ ಇತರ ೯ ಆರೋಪಿಗಳು ಜಾಮೀನು ಅರ್ಜಿ ಸಲ್ಲಿಸಿದರು. ಇದಕ್ಕೆ ಆಕ್ಷೇಪಣೆ ಸಲ್ಲಿಸಲು ಲೋಕಾಯುಕ್ತ ಪೊಲೀಸರು ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ನ್ಯಾ.ಎನ್.ಕೆ. ಸುಧೀಂದ್ರರಾವ್ ವಿಚಾರಣೆಯನ್ನು ಜು.೨೩ಕ್ಕೆ ಮುಂದೂಡಿದ್ದಾರೆ.ವಿದೇಶ ಪ್ರವಾಸದ ನೆಪದಲ್ಲಿ...
|
ರೂಪದರ್ಶಿ ಹಾಗೂ ನಟಿ ಮೀರಾ ಚೋಪ್ರಾ ಮೇಲೆ ಗುರಗಾಂವ್ ಪೊಲೀಸರು ಕೊಲೆ ಪ್ರಕರಣ ದಾಖಲಿಸಲಾಗಿದೆ. ಈಕೆ ಬಾಲಿವುಡ್ ತಾರೆ ಪ್ರಿಯಾಂಕಾ ಚೋಪ್ರಾ ಅವರ ಸೋದರ ಸಂಬಂಧಿ. ರುಚಿ ಭುಟ್ಟಾನ್ (28) ಎಂಬ ದೆಹಲಿ ಮೂಲದ ವಿವಾಹಿತ ಮಹಿಳೆ ಕೊಲೆಗೆ ಸಂಬಂಧಿಸಿದಂತೆ ಮೀರಾ ಮೇಲೆ ಕೇಸ್ ದಾಖಲಿಸಲಾಗಿದೆ.ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ರುಚಿ ಸಂಬಂಧಿಗಳು ಅಭಿಪ್ರಾಯಪಟ್ಟಿದ್ದು, ಕೊಲೆಯ ಹಿಂದೆ ಆಕೆಯ ಪತಿ ಸುಮಿತ್ ಭುಟ್ಟಾನ್ ಕೈವಾಡವಿದೆ ಎಂದು ಆರೋಪಿಸಿದ್ದಾರೆ. ವಿಚಿತ್ರ ಎಂದರೆ ಮೀರಾ ಚೋಪ್ರಾ ಜೊತೆ ಸುಮಿತ್ಗೆ ವಿವಾಹೇತರ...
|
ತಿರುವನಂತಪುರ: ತಾವೇ ನೀಡಿದ ವಿವಾದಿತ ಹೇಳಿಕೆಯಿಂದ ಸಿಪಿಎಂ ನಾಯಕ ಎಂ.ಎಂ.ಮಣಿ ಕೊಲೆ ಪ್ರಕರಣದಲ್ಲಿ ಸಿಲುಕುವಂತಾಗಿದೆ. ಕೇರಳ ಸಿಪಿಎಂನ ಇಡುಕ್ಕಿ ಜಿಲ್ಲಾ ಕಾರ್ಯದರ್ಶಿ ಮಣಿ ವಿರುದ್ಧ ಪೊಲೀಸರು ಕೊಲೆ, ದುಷ್ಪೇರಣೆ ಹಾಗೂ ಮಾಹಿತಿ ಮರೆಮಾಚಿರುವ ಆರೋಪದ ಮೇಲೆ ಕೇಸು ದಾಖಲಿಸಿದ್ದಾರೆ. ವಿಶೇಷ ತನಿಖಾ ದಳ ಈ ಪ್ರಕರಣದ ತನಿಖೆಯನ್ನು ಕೈಗೊಳ್ಳಲಿದೆ. ಇತ್ತೀಚೆಗಷ್ಟೇ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಮಣಿ ಅವರು, "ಪಕ್ಷವು ಈ ಹಿಂದೆಯೇ ಮೂವರು ರಾಜಕೀಯ ವೈರಿಗಳ ನಿರ್ನಾಮ ಮಾಡುವ ಗುರಿ ಇಟ್ಟುಕೊಂಡಿತ್ತು....
|
Timeline.ಕೋಲಾರ, ನ.23: ಇಲ್ಲಿನ ಚಿನ್ನದ ಗಣಿಯಲ್ಲಿ ತಮಿಳುನಾಡಿನ ಅಣು ಕಸ ಹಾಕುವುದನ್ನು ವಿರೋಧಿಸಿ ಶುಕ್ರವಾರ(ನ.23)ಕೆಜಿಎಫ್ ಬಂದ್ ಆಚರಿಸಲಾಗಿದೆ. ಬಂದ್ ನಡುವೆಯೇ ಮುಂಜಾನೆಯಿಂದಲೇ ಲೋಕಾಯುಕ್ತ ಪೊಲೀಸರು ಕೋಲಾರದಲ್ಲಿ ನಾಲ್ಕು ಕಡೆ ದಾಳಿ ನಡೆಸಿದ್ದಾರೆ.ಅವ್ಯವಹಾರ ಮತ್ತು ಭ್ರಷ್ಟಾಚಾರದಲ್ಲಿ ತೊಡಗಿರುವ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಗೂ ನೌಕರ ಮನೆ ಮತ್ತು ಕಚೇರಿ ಮೇಲೆ ಏಕಕಾಲಕ್ಕೆ ದಾಳಿ ನಡೆದಿದೆ. ದಾಳಿ ವೇಳೆ ಅಪಾರ ಪ್ರಮಾಣದ ನಗದು ಹಾಗೂ ಆಸ್ತಿ ಪತ್ರಗಳು ಪತ್ತೆಯಾಗಿದೆ.ಕೋಲಾರ ಜಿಲ್ಲೆ...
|